ಪೋಸ್ಟ್‌ಗಳು

ಅಕ್ಟೋಬರ್, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನೀರ ಮೇಲಣ ಗುಳ್ಳೆ

ಇಮೇಜ್
"ನೀರಿನಲ್ಲಿ ಮುಳುಗಿ ನಟನೊಬ್ಬನ ದುರ್ಮರಣ" ಎಂಬ ಶೀರ್ಷಿಕೆಯೊಂದಿಗ ವಾಹಿನಿಯಲ್ಲಿ ಸುದ್ದಿ ಬಿತ್ತರವಾಗುತ್ತಿತ್ತು. "ಈಜು ಬರಲ್ಲ, ಆದ್ರೂ ಶಾಟ್ ಮಾಡೋದಿಕ್ಕೆ ರೆಡಿ, ಮುಂದಿದ್ದನ್ನ ದೇವ್ರು ನೋಡ್ಕೋತಾನೆ ಎಂಬ ನಂಬಿಕೆ ಇದೆ" ಸಾಯುವ ಸ್ವಲ್ಪ ಹೊತ್ತಿನ ಮುಂಚೆ ನಡೆದ ಸಂದರ್ಶನದಲ್ಲಿ ನಟನಾಡಿದ ಕೊನೆಯ ಮಾತುಗಳಾಗಿದ್ದವು ಅವುಗಳು.  "ಈಜು ಬರದೆ ಶಾಟ್ ಮಾಡೋದಿಕ್ಕೆ ಒಪ್ಕೋಬಾರದಿತ್ತು" ಅಲ್ಲೇ ನೆರೆದಿದ್ದ ಜನರು ಮಾತನಾಡಿಕೊಂಡರು. ಸುದ್ದಿ ನೋಡಿ ಟಿವಿ ಆರಿಸಿದ ಚೇತನ್ ಆಫೀಸಿಗೆ ಹೊರಟ. ದಾರಿಯುದ್ದಕ್ಕೂ ಅದೇ ಘಟನೆ ಅವನ ಕಣ್ಮುಂದೆ ಸುಳಿದಾಡುತ್ತಿತ್ತು. ಎಂದಿನಂತೆ ಯಾಂತ್ರಿಕವಾಗಿ ಕೆಲಸ ಮುಗಿಸಿ ಬಂದವನು ಹಾಸಿಗೆಯಲ್ಲುರುಳಿದನು. ಪತ್ನಿ, ಮಕ್ಕಳಿಲ್ಲದ ಮನೆ ಬಿಕೋ ಎನ್ನುತ್ತಿತ್ತು. ದೀಪಾವಳಿ ಹಬ್ಬಕ್ಕೆಂದು ಅವರೆಲ್ಲರೂ ಸ್ವಲ್ಪ ದಿನ ಮುಂಚಿತವಾಗಿಯೇ ಊರಿಗೆ ತೆರಳಿದ್ದರು.  "ಏನ್ರೀ ಹಬ್ಬದ ದಿನಗಳಲ್ಲಿಯೂ ನಿಮ್ಮ ಕೆಲಸ ಇದ್ದೇ ಇರ್ತದೆ. ಎಲ್ಲರೂ ಹಬ್ಬಾಂತ ಊರಿಗೆ ಹೊರಟಿದ್ದಾರೆ. ನೀವು ಮಾತ್ರ ಕೆಲಸ, ಕೆಲಸ ಅಂತ ಒದ್ದಾಡ್ತೀರ. ಅಷ್ಟಕ್ಕೂ, ನಿಮ್ಮದೇ ಆಫೀಸ್, ನೀವೇ ಬಾಸ್. ಹಬ್ಬದ ದಿನಗಳಲ್ಲಾದರೂ ಕೆಲಸ ಪಕ್ಕಕ್ಕಿಟ್ಟು ಮನೆಯವರ ಜೊತೆ ಇರಬಾರದಾ? ನೀವೂ ಬಂದಿದ್ದರೆ ಅತ್ತೆ,ಮಾವ,ಅಪ್ಪ, ಅಮ್ಮ ಎಲ್ಲ ಖುಷಿ ಪಡುತ್ತಿದ್ದರು" ಪತ್ನಿ ಹೋಗುವ ಹಿಂದಿನ ದಿನ ಅಸಮಾಧಾನದಿಂದ ನುಡಿದಿದ್ದಳು. ಚೇತನ್ ತುಟಿಪಿಟಿಕ್ಕ...

ಮನ ಮುದಗೊಳಿಸುವ, ಅನುಭವ ತರಿಸುವ ಪ್ರವಾಸಿ ತಾಣಗಳು

ಇಮೇಜ್
ಮರುದಿನ ಬೆಳಗ್ಗೆ ಎದ್ದಾಗ ಗಂಟೆ ಏಳು. ಆ ದಿನ ವಚನ ಸಾಹಿತ್ಯ ಸಮ್ಮೇಳನದ ದಿನವಾದ್ದರಿಂದ ಮತ್ತು ಆ ಕಾರ್ಯಕ್ರಮದ ಅಂಗವಾಗಿ ಈ ಪ್ರವಾಸ ಯೋಜನೆ ಇದ್ದುದರಿಂದ ಬೇರೆ ತಾಣಗಳನ್ನು ನೋಡುವ ಅಂದಾಜಿನಲ್ಲಿ ನಾವಿರಲಿಲ್ಲ. "ದಿಲ್ಲಿ ಮೇ ಅಕ್ಷರಧಾಮ್ ನಹೀ ದೇಖಾ ತೋ ಕ್ಯಾ ದೇಖಾ?" (ದೆಹಲಿಯಲ್ಲಿ ಅಕ್ಷರಧಾಮ ನೋಡದೆ ಇದ್ದರೆ, ಬೇರೆ  ತಾಣ ನೋಡಿಯೂ ಏನು ಪ್ರಯೋಜನ) ಎಂಬ ಬರಹಗಳನ್ನು ಅಂತರ್ಜಾಲ ದಲ್ಲಿ ಓದಿದ್ದೆ. ಆದರೆ ನಾವು ಬಂದ ರೈಲು ಅಂದುಕೊಂಡಿದ್ದ ಸಮಯಕ್ಕಿಂತ ತಡವಾಗಿ ದೆಹಲಿಗೆ ತಲುಪಿ ಆ ದಿನದ ಅಕ್ಷರಧಾಮದ ಕಾರ್ಯಕ್ರಮ ರದ್ದಾಗಿತ್ತು. ಆದರೆ ಅನಿರೀಕ್ಷಿತವಾಗಿ ಕಾರ್ಯಕ್ರಮದ ಆಯೋಜಕಿ ಬಂದು "ಕಾರ್ಯಕ್ರಮ ಇರುವುದು ನಾಲ್ಕು ಗಂಟೆಗೆ, ನ್ರತ್ಯಕ್ಕಿರುವವರು ಬಿಟ್ಟು ಉಳಿದವರು ಹೋಗುವುದಿದ್ದರೆ ವ್ಯವಸ್ಥೆ ಮಾಡ್ತೇವೆ" ಎಂದಾಗ ನನ್ನ ಸಂತೋಷಕ್ಕೆ ಎಣೆಯೇ ಇಲ್ಲದಂತಾಗಿತ್ತು. ಬೇಗನೆ ತಯಾರಾಗಿ ಹೊರಟ ನಮ್ಮ ತಂಡ ನಾಲ್ಕು ಬಾಡಿಗೆ ಕಾರಲ್ಲಿ ಅಕ್ಷರಧಾಮ ಕ್ಕೆ ಹೊರಟಿತು.  ಸುಮಾರು ಒಂದು ಗಂಟೆಯ ಬಳಿಕ ಗಮ್ಯ ಸ್ಥಳ ತಲುಪಿದೆವು. ಅಕ್ಷರಧಾಮದಲ್ಲಿ ಹಣದ ಚೀಲದ ಹೊರತಾಗಿ ಏನನ್ನೂ ಒಳಗೆ ಒಯ್ಯುವಂತಿಲ್ಲ. ಕುಡಿಯುವ ನೀರಿನಿಂದ ಹಿಡಿದು, ತಿನ್ನಲು, ಶೌಚದ ಹೀಗೆ ಎಲ್ಲಾ ವ್ಯವಸ್ಥೆಯೂ ಇದೆ. ಸರತಿ ಸಾಲಿನ ವ್ಯವಸ್ಥೆ ನೋಡಿದ ನನಗೆ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ದೇವಸ್ಥಾನದ ನೆನಪಾಯಿತು. ಅಷ್ಟೊಂದು ಜನರಿದ್ದರೂ ಎಲ್ಲವೂ ಅಚ್ಚುಕಟ್ಟು,ನೂಕು ನುಗ್ಗಲು ಎ...

ದೆಹಲಿ ಪ್ರವಾಸ, ಪ್ರಯಾಸ-5

ಇಮೇಜ್
ತಾಜ್ ಮಹಲ್ ಇರುವ ಅಂಗಣಕ್ಕೆ ಕಾಲಿಡುವ ಮೊದಲು ಚಪ್ಪಲಿ ತೆಗದು ಇರಿಸಬೇಕು ಅಥವಾ ಚಪ್ಪಲಿ ಹಾಕಲೇಬೇಕೆಂದಿದ್ದಲ್ಲಿ ಅವರು ಕೊಡುವ ಕಾಗದದ ಕವಚವನ್ನು ಧರಿಸಬೇಕು. ಇದು ತಾಜ್ ಮಹಲ್ ನ ನುಣುಪಾದ ಮೇಲ್ಮೈಯನ್ನು ಧೂಳುಗಳಿಂದ ಕಾಪಾಡುತ್ತದೆ. ಇದರ ಮಾಹಿತಿ ಯಿಲ್ಲದ ನಾವು ಚಪ್ಪಲಿಯನ್ನು ಚಪ್ಪಲಿ ಇಡುವ ಜಾಗದಲ್ಲಿ ಇಟ್ಟು ಅಂಗಣಕ್ಕೆ ಕಾಲಿಟ್ಟಾಗ ಕಂಡದ್ದು ಮೀಟರುಗಟ್ಟಲೆ  ಸರತಿ ಸಾಲಿನಲ್ಲಿ ನಿಂತ ಜನ ಸಾಗರ. ತಾಜ್ ಮಹಲ್ ಮೇಲಿನ ಅಂತಸ್ತಲ್ಲಿರುವವರೆಲ್ಲ ಇರುವೆಗಳಂತೆ ಕಾಣುತ್ತಿದ್ದರು. ಸಾಲಿನಲ್ಲಿ ನಿಂತು ತಾಜ್ ಒಳಗೆ ಹೋಗುವುದು ಅಸಾಧ್ಯವಾಗಿತ್ತು. ಜೊತೆಗೆ ನಮ್ಮೊಡನೆ ಪ್ರವಾಸಕ್ಕೆಂದು ಬಂದವರು ಈ ಜನಜಂಗುಳಿಯ ಮಧ್ಯದಲ್ಲಿ ಕಳೆದು ಹೋಗಿದ್ದರು. ನಾನು, ಅಮ್ಮ, ತನ್ವಿ,ನನ್ನಕ್ಕನ ಜೊತೆ ನಮ್ಮೂರಿನವರಾದ ಕ್ರಷ್ಣಪ್ಪ ಇದ್ದುದೇ ನಮಗೆ  ಸಮಾಧಾನ. "ಬಲೆ,ಬಲೆ ಎನ್ನ  ಪಿರಾವುಡ್ದ್ ಬಲೆ"  ಎನ್ನುತ್ತಾ ಸಾಲು ತಪ್ಪಿಸಿ ಮುಂದಿನ ಸಾಲು ಸೇರಲು ಪ್ರಯತ್ನಿಸಿದಾಗ ಅವರ ಬೈಗುಳ ಕೇಳಬೇಕಾಗಿ ಬಂತು. "ಬೇಡ, ಸಾಲು ತಪ್ಪಿಸಿ ಹೋಗುವುದು ಸರಿಯಲ್ಲ" ನಾನೆಂದೆ.  ಕೆಲ ಕ್ಷಣಗಳಲ್ಲಿ ಸಾಲಿನಲ್ಲಿ ನಿಂತಿದ್ದ ಜನರು ಗಡಿಬಿಡಿಯಲ್ಲಿ ಒಂದು ಮೂಲೆಗೆ ಓಡುವುದು ಕಂಡೆವು. ಏನೆಂದು ಅರಿವಾಗದೆ ನಾವೂ ಕೈ,ಕೈ ಹಿಡಿದುಕೊಂಡು ಓಡಲಾರಂಭಿಸಿದೆವು. ನಮ್ಮ ಹಿಂದೆಯೇ ಕ್ರಷ್ಣಪ್ಪ ಬಂದರು. ಪುನಃ ನೂಕು ನುಗ್ಗಲು. ಅಲುಗಾಡಲು ಆಗದಂಥಾ ಪರಿಸ್ಥಿತಿಯಲ್ಲಿ ನಾವು ನಾಲ್ವರೂ...

ದೆಹಲಿ ಪ್ರವಾಸ, ಪ್ರಯಾಸ-4

ಇಮೇಜ್
 ಬಹುಶಃ ನಾವು ಮಥುರಾದ 2% ನಷ್ಟೂ ನೋಡಿರಲಿಕ್ಕಿಲ್ಲ. ಏಕೆಂದರೆ ಮಥುರಾ ದಲ್ಲಿ ಬಾ ಕೆ ಬಿಹಾರಿ, ದ್ವಾರಕಾಧೀಶ ಮಂದಿರ, ಕಂಸ ಕಿಲಾ, ಪ್ರೇಮ ಮಂದಿರ ದಂತಹ ಇನ್ನೂ ಅನೇಕ ಪ್ರವಾಸಿ ತಾಣಗಳು ಇವೆ.  ಮಥುರಾದ ನಂತರ ಆ ದಿನದ ನಮ್ಮ ಕೊನೆಯ ಭೇಟಿಯ ಪ್ರವಾಸಿ ಸ್ಥಳ ತಾಜ್ ಮಹಲ್. ತಾಜ್ ಮಹಲ್ ಮಥುರಾ ದಿಂದ.ಸುಮಾರು 60 ಕಿ.ಮೀ ದೂರದಲ್ಲಿದೆ.  ಮಧ್ಯಾಹ್ನದ ಹೊತ್ತು. ಕೆಲವರು ಬೆಳಗಿನ ಮಿಕ್ಕಿದ್ದ ಚಿತ್ರಾನ್ನವನ್ನು ತಿಂದರು. ಉಳಿದವರು ಢಾಬಾದಲ್ಲಿ ಉಪಹಾರ ಸೇವಿಸಿದರು.ಪ್ರಯಾಣದ ಮಧ್ಯ ಹೊತ್ತು ಕಳೆಯಲೆಂದು, ಪ್ರತಿಭಾ ಪ್ರದರ್ಶನ ಮಾಡಿದೆವು. ಈ ಮಧ್ಯೆ ನಾನೂ, ನನ್ನ ಮ್ಮನ ಹಾಡಿನ ಜುಗಲ್ ಬಂದಿ ಕಾರ್ಯಕ್ರಮ ನಡೆಯಿತು. ನಂತರದಲ್ಲಿ ನಾನು,ನನ್ನ ಅಕ್ಕನ ಮಗಳು ತನ್ವಿಯ ಜುಗಲ್ ಬಂದಿ ನಡೆಯಿತು. ನಂತರದಲ್ಲಿ ತನ್ವಿ ಒಂದರ ಮೇಲೊಂದರಂತೆ ಹಾಡು ಹಾಡಿ ಎಲ್ಲರನ್ನೂ ರಂಜಿಸಿದಳು. ರಂಗಿತರಂಗದ 'ಡೆನ್ನಾನ' ಹಾಡು ಹಾಡಿ ಎಲ್ಲರ ಮೆಚ್ಚುಗೆಗೆ ಪಾತ್ರಳಾದಳು. ಹೀಗೆ ಒಬ್ಬರ ನಂತರ ಒಬ್ಬರು ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡಿದರು. ಕೊನೆಗೂ ನಮ್ಮ ಬಸ್ ಆಗ್ರಾ ಪ್ರವೇಶ ಮಾಡಿತು.  ಅದಾಗಲೇ ಸಂಜೆ 3:30  ಆಗಿದ್ದರಿಂದ ವಿಪರೀತ ವಾಹನ ದಟ್ಟಣೆ. ಬಸ್ ಅಲ್ಲಲ್ಲಿ ನಿಂತು ಸಾಗುತ್ತಿತ್ತು. ನೇತು ಹಾಕಿದ ನಾಮ ಫಲಕದಲ್ಲಿ ತಾಜ್ ಮಹಲ್ 1k.m  ಎಂದು ಬರೆದಿತ್ತು.ಸದ್ಯ ತಲುಪಿದೆವಲ್ಲ  ಅಂದುಕೊಂಡೆ. ಆದರೆ ಬಸ್ ಮುಂದೆ ಸಾಗುತ್ತಿತ್ತೆ ವಿನಹ 1k...

ದೆಹಲಿ ಪ್ರವಾಸ, ಪ್ರಯಾಸ-3

ಇಮೇಜ್
"ಮಥುರಾ" ಶ್ರೀ ಕ್ರೃಷ್ಣನ ಜನ್ಮ ಸ್ಥಾನ. ಎಂದಾದರೊಮ್ಮೆ  ನೋಡಬೇಕು ಅಂದುಕೊಂಡ ಸ್ಥಳ. ಆ ಸ್ಥಳಕ್ಕೆ  ಭೇಟಿ ಕೊಡುವ ಭಾಗ್ಯ ಬಂದದ್ದು. ಒಂದು ಪವಾಡವೆಂದೇ ಹೇಳಬೇಕು. "ಅಯ್ಯೋ, ಅದರಲ್ಲೇನಿದೆ. ಟೂರ್ ಪ್ಯಾಕೇಜ್ ಕಾಯ್ದಿರಿಸಿ ಹೋದರಾಯ್ತು" ಅಂತ ನೀವು ಅಂದುಕೊಳ್ಳಬಹುದು. ಆದರೆ ಪ್ರವಾಸ ಕ್ಕೆ ಹೋಗುವ ನಿರ್ಧಾರ ಮಾಡದೆ ಅನಿರೀಕ್ಷಿತವಾಗಿ ಬಂದ ಅವಕಾಶದಲ್ಲಿ ಹೋಗುವದರಲ್ಲಿ ಇರುವ ಮಜಾ ಇದೆಯಲ್ಲ, ಅದರ ಅನುಭೂತಿ ಬೇರೆಯೇ ರೀತಿ ಇರುತ್ತದೆ.  ಬೆಳ್ಳಂಬೆಳಗ್ಗೆ ಎದ್ದ ನಮ್ಮ ಸವಾರಿ ಮಥುರಾ ಕಡೆಗೆ ಹೊರಟಿತು. ನಾವು ಉಳಕೊಂಡ ಸ್ಥಳದಿಂದ ಸುಮಾರು 150 ಕಿ.ಮೀ ದೂರದಲ್ಲಿತ್ತು ಮಥುರಾ. ದಾರಿಯ ಮಧ್ಯ ದಲ್ಲಿ ಮೊದಲೇ ಕಟ್ಟಿ ಕೊಂಡ ಚಿತ್ರಾನ್ನ,ವಡೆಯಿಂದ ಹೊಟ್ಟೆ ತುಂಬಿಸಿಕೊಂಡು ನಮ್ಮ ಪ್ರಯಾಣವನ್ನು ಮುಂದುವರೆಸಿದೆವು. ಸಮಯ ಕಳೆಯಲು ಅಂತ್ಯಾಕ್ಷರಿ ಆಡಿದೆವು.  ಮೊದಲು ಭೇಟಿ ನೀಡಿದ ಸ್ಥಳ ಕ್ರಷ್ಣನ ಅನೇಕ ಮಂದಿರಗಳಲ್ಲಿ ಒಂದಾದ, ಔರಂಗಾಜೇಬನ ಆಳ್ವಿಕೆಗೆ ತುತ್ತಾದ,ವ್ರೃಂದಾವನ ಧಾಮದ ಗೋವಿಂದ ದೇವ್ ಜೀ ಮಂದಿರ . ಅಲ್ಲಿ ಮಂಗಗಳ ಹಾವಳಿ ಹೆಚ್ಚು. ಆದ್ದರಿಂದ ತಿಂಡಿ ತಿನಿಸುಗಳ ಚೀಲವನ್ನು ಬಸ್ ನಲ್ಲೇ ಬಿಟ್ಟು ತೆರಳಬೇಕೆಂದು ಆಯೋಜಕರು ಸೂಚಿಸಿದರು.ಅವರ ಸೂಚನೆ ಪಾಲಿಸಿದ ನಾವುಗಳು  ಮಂದಿರದ ದಾರಿಯನ್ನು ತುಳಿದೆವು.ಮಂದಿರದ ಹೊರಾಂಗಣ ವಿನ್ಯಾಸ ಅದರ ಪ್ರಾಚೀನತೆಯನ್ನು ಸಾರುತ್ತಿತ್ತು. ಕೆಂಪು ಕಲ್ಲಿನಿಂದ ಕಟ್ಟಲಾದ ಬ್ರೃಹತ್ ಕಟ್ಟಡ,ಅಂತ...

ದೆಹಲಿ ಪ್ರವಾಸ,ಪ್ರಯಾಸ- 2

ಇಮೇಜ್
  ಬೆಳಿಗ್ಗೆ ಉಪ್ಪಿಟ್ಟು ತಿಂದ ನಾವು ಮೊದಲು ಪ್ರಯಾಣ ಬೆಳೆಸಿದ್ದು ಕುತುಬ್ ಮಿನಾರ್ ಕಡೆಗೆ. ಒಂದೆಡೆ  ವಾಹನ ದಟ್ಟಣೆ,ಇನ್ನೊಂದು ಕಡೆ ಸಮಯದ ಅಭಾವದಿಂದ ಸಾಧ್ಯವಾದಷ್ಟು ಬೇಗ ವೀಕ್ಷಿಸಲು ಆಯೋಜಕರು ಹೇಳಿದ್ದರು. ಹಾಗಾಗಿ ನಾವೂ ಗಡಿಬಿಡಿಯಿಂದ ಕುತುಬ್ ಮಿನಾರ್,ಅದರ ಪಕ್ಕವೇ ಇದ್ದ ಮಹಮದ್ ಖಿಲ್ಜಿ ಮುಂತಾದ  ದೊರೆ ಗಳ  ಮದರಸಗಳನ್ನು ನೋಡಿದೆವು. ಬಹುತೇಕ ಕಟ್ಟಡಗಳು ಶಿಥಿಲಾವಸ್ಥೆಯನ್ನು ತಲುಪಿವೆ.   ನಿರ್ಗಮನದ ದಾರಿಯಲ್ಲಿ ಅಳಿಲೊಂದು ಕುಣಿಯುತ್ತಾ ಬಂದು ನಮ್ಮನ್ನು ಸ್ವಾಗತಿಸಿತು. ಅದಕ್ಕೊಂದು ಬಿಸ್ಕತ್ ತುಣುಕು ಕೊಟ್ಟು ಬಸ್ ನಿಂತ ಕಡೆಗೆ ಹೊರಟೆವು.                         ಮುಂದಿನ ವೀಕ್ಷಣೆ   ಲೋಟಸ್ ಟೆಂಪಲ್. ಸುಂದರವಾದ ಉದ್ಯಾನದ ಮಧ್ಯೆ ಕೊಳಗಳಿಂದ ಆವೃತವಾದ ಅರೆಬಿರಿದ ತಾವರೆ. ತಾವರೆಯ ಒಳಭಾಗದಲ್ಲಿ ಚರ್ಚಿನಂತೆ ಕಾಣುವ ದೇವಾಲಯ. ವಿನ್ಯಾಸ ಮಾಡಿದವರ ಬುದ್ಧಿವಂತಿಕೆಗೆ ಒಂದು ಸಲಾಮ್ .   ಬಳಿಕ ನಮ್ಮ ಸವಾರಿ ಕೆಂಪುಕೋಟೆಯತ್ತ ಹೊರಟಿತು. ಅದಾಗಲೇ ಊಟದ ಹೊತ್ತಾದ್ದರಿಂದ ವೊದಲು ಹೊಟ್ಟೆ ಪೂಜೆ ಮತ್ತೆಲ್ಲಾ ಮತ್ತೆ ಅಂದುಕೊಂಡು ರಸ್ತೆ ಬದಿಯ ಗಾಡಿಯವನಿಂದ ಆಲೂ ಪರೋಟ, ಗೋಭಿ ಸಬ್ಜೀ ಕೊಂಡು ತಿಂದೆವು. ಟಿಕೆಟ್ ಕೊಳ್ಳುವಲ್ಲಿ ಮಾರುದ್ದ ಸಾಲು. ಒಳಗೆ ಹೋದರೆ ನಂತರ ಶಾಪಿಂಗ್ ತಡವಾಗಬಹುದು ಎಂದು ಆಯೋಜರು ಹೇಳಿ...

ದೆಹಲಿ ಪ್ರವಾಸ,ಪ್ರಯಾಸ -1

ಇಮೇಜ್
ಇದು ನನ್ನ   ಅತ್ಯಂತ  ದೀರ್ಘ ಅವಧಿಯ ಪ್ರಯಾಣ  ಎನ್ನಬಹುದು.  ಮಂಗಳೂರಿನಿಂದ ಹೊರಟು  ಸುಮಾರು ಎರಡು ದಿನ ಮತ್ತು ಕೆಲವು  ಗಂಟೆಗಳ ಪ್ರಯಾಣವದು.  ಪ್ರಯಾಣದ ಮಧ್ಯದಲ್ಲಿ ಇನ್ನೇನು ದಿಲ್ಲಿ ತಲುಪಲು  ಒಂದು ದಿನ ಇದೆ ಎನ್ನುವಲ್ಲಿ ನಾವು ಕುಳಿತ ಸ್ಥಳಕ್ಕೆ ದಂಪತಿಯ ಪ್ರವೇಶವಾಯಿತು. ಆ ರಾತ್ರಿ ಕಳೆದು ಮರುದಿನ ಝಾನ್ಸಿ ಯಲ್ಲಿ ಅವರು ಇಳಿಯುವವರಿದ್ದರು. ಜೊತೆಗೆ ಅವರ ಮೊಮ್ಮಗಳು. ಸ್ವಲ್ಪದರಲ್ಲಿ ನನ್ನ ಅಕ್ಕನ ಮಗಳಿಗೂ ಅವಳಿಗೂ ಸ್ನೇಹವಾಯಿತು. ಉತ್ತರ ಭಾರತೀಯಳಾದ ಅವಳಿಗೋ ಕನ್ನಡ ಕಲಿಯುವ ಆಸೆ. ಇವಳೊಂದಿಗೆ ಹಿಂದಿಯಲ್ಲಿ ಮಾತನಾಡುತ್ತ ಕನ್ನಡ ಕಲಿತುಕೊಳ್ಳುತ್ತಿದ್ದಳು. ಹಾಗೂ ಹೀಗೂ ರಾತ್ರಿ ಕಳೆದು  ಬೆಳಗಿನ ಜಾವ ಕಳೆದ ಸ್ವಲ್ಪದರಲ್ಲೇ ಝಾನ್ಸಿಗೆ ತಲುಪುವುದರಲ್ಲಿದ್ದೆವು.  ರಾಣಿ ಲಕ್ಷ್ಮೀ ಬಾಯಿಯ ಯಶೋಗಾಥೆಯನ್ನು ಹಿಂದಿ ಧಾರವಾಹಿ ವೀಕ್ಷಿಸಿ   ಅವಳ ಅಭಿಮಾನಿಯಾಗಿದ್ದ ನನ್ನ ಮನದಲ್ಲಿ ಹೇಳಲಾರದ ಆನಂದ. "ಅಂಕಲ್ ಜೀ  ಆಪ್ ಕಹಾಂ ಕೆ ರಹ್ನೇ ವಾಲೆ ಹೇಂ" ಎಂದು ಅವರನ್ನು ಕೇಳಿದೆ. "ಝಾನ್ಸಿ" ಎಂದುತ್ತರಿಸಿದ ಕ್ಷಣ ನಾನು ಹುರುಪಿನಿಂದ ಧಾರಾವಾಹಿ ನೋಡಿದ ಬಗ್ಗೆ ವಿವರಿಸಿ ಝಾನ್ಸಿ ಅರಮನೆ ಹೇಗಿದೆ ಎಂದು ಕೇಳಿದೆ. ಝಾನ್ಸಿ  ರಾಣಿಯ ಅರಮನೆ, ಕೋಟೆ ನೋಡುವಂತಿದ್ದರೆ ಚೆನ್ನಾಗಿರುತ್ತಿತ್ತು ಎಂದು ಮನಸ್ಸು ಹೇಳುತ್ತಿತ್ತು. ಆದರೆ ಆತನ ಮುಖದಲ್ಲಿ ಏನೂ ಬದಲಾವಣೆ...