ಪೋಸ್ಟ್‌ಗಳು

ಎಲ್ಲಿಗೀ ಪಯಣ

ಬಸ್ಸು ಶರವೇಗದಿಂದ ಬೆಂಗಳೂರಿಂದ ಮಂಗಳೂರಿಗೆ ಧಾವಿಸುತ್ತಿತ್ತು. ಸಹ ಪ್ರಯಾಣಿಕರು ಗಾಢ ನಿದ್ರೆಯಲ್ಲಿದ್ದರೂ  ಮಾತ್ರ ನಿದ್ದೆ ಹತ್ತಿರಲಿಲ್ಲ.ಜಯಂತ, ಬೆಂಗಳೂರಿನ ಕಂಪೆನಿಯೊಂದರಲ್ಲಿ ಕೆಲಸಕ್ಕಿದ್ದವನು ರಜೆಯ ನಿಂತ್ತ  ಹೊರಟಿದ್ದ. ಆದರೆ ಮನೆಯಲ್ಲಿ ಮಾತ್ರ ಈ ಸಲ ತನಗೆ ಬರಲಾಗದು ಎಂದು ತಿಳಿಸಿದ್ದ. ಮನೆಯವರಿಗೆ ಸರ್ಪ್ರೈಜ್ ಕೊಡುವುದು ಅವನ  ಪ್ಲಾನ್ ಆಗಿತ್ತು. ಅವನ ಮನದಲ್ಲಿ ಸಂತಸದ ಅಲೆಗಳು ಏಳುತ್ತಿತ್ತು. ಹಬ್ಬವಾದ್ದರಿಂದ ಮನೆಯವರಿಗೆಲ್ಲ ಬಟ್ಟೆಗಳನ್ನು ಕೊಂಡುಕೊಂಡಿದ್ದ. "ತಂಗಿ ಮುಂದೆ ಅವಳಿಷ್ಟದ ಅನಾರ್ಕಲಿ ಡ್ರೆಸ್  ಹಿಡಿದರೆ ಅವಳ ಮುಖ ಹೇಗೆ ಅರಳಬಹುದು, ಅಪ್ಪ,ಅಮ್ಮ ಎಷ್ಟು ಖುಷಿ ಪಡಬಹುದು, ಅಮ್ಮನ ಕೈಯ ನೀರುದೋಸೆ ತಿಂದು ಎಷ್ಟು ದಿನ ಆಯಿತು"  ಯೋಚಿಸುತ್ತಿದ್ದವನಿಗೆ ಸಣ್ಣಗೆ ನಿದ್ದೆ ಆವರಿಸಿತು. ದಢಾರ್ ಅಂತ ಅಂತ ಸದ್ದು. ಏನಾಯ್ತು ಎಂದು ತಿಳಿಯುವ ಮೊದಲೇ ಜಯಂತನಿಗೆ ಪ್ರಜ್ಞೆ ತಪ್ಪುತ್ತಿರುವ ಅನುಭವ. ಪ್ರಯಾಣಿಕರ ಅಳು ಚೀರಾಟ ಕೇಳುತ್ತಿತ್ತು.  ಮನೆಯವರಿಗೆ ಸಪ್ರೈಜ್ ಕೊಡಲು ಹೊರಟ  ಜಯಂತ ಮತ್ತೆಂದೂ ಬಾರದ  ಲೋಕಕ್ಕೆ  ಪಯಣಿಸಿದ್ದ.  

ಒಂದು ಕನಸಿನ ಕಥೆ

ಇಮೇಜ್
ಬಸ್ಸು ಎಂದಿನಂತೆ ಜನರಿಂದ ತುಂಬಿ ತುಳುಕುತ್ತಿತ್ತು. ಅಂತೂ ಹೇಗೋ ಮಾಡಿ ಸೀಟನ್ನು ಹಿಡಿದಳು ತೇಜಸ್ವಿನಿ. ನಿತ್ಯವೂ ಇದೇ ಗೋಳು. ಆದರೆ ಏನು ಮಾಡುವುದು,ಕಾಲೇಜಿಗೆ ಹೋಗಲು ಇದೇ ಬಸ್ ಆಗಬೇಕು.  "ಇನ್ನೊಂದು ವರ್ಷ ಅಷ್ಟೆ, ಆಮೇಲೆ ಈ ಬಸ್ ಓಡಾಟ ಮುಗೀತದೆ" ಮನದಲ್ಲಿ ಅಂದುಕೊಂಡಳು. ಮುಂದಿನ ಸ್ಟಾಪ್ ನಲ್ಲಿ ಮಗು ವನ್ನೆತ್ತಿಕೊಂಡ ಮಹಿಳೆ ಒಬ್ಬಳು ಬಸ್ ಹತ್ತಿದಳು.  ಸೀಟ್ನಲ್ಲಿ ಕೂತ ತೇಜಸ್ವಿನಿ ಜಾಗ ಬಿಟ್ಟು ಕೊಡಲೆತ್ನಿಸಿದಾಗ ಕುಳಿತು ಕೊಳ್ಳುವಂತೆ ಸನ್ನೆ ಮಾಡಿದ ಮಹಿಳೆ ತನ್ನ ಕೈಯಲ್ಲಿ ದ್ದ ಮಗುವನ್ನು ಅವಳಿಗೆ ಕೊಟ್ಟಳು. ಏನಾಶ್ಚರ್ಯ! ಕಿಂಚಿತ್ತೂ ಕೊಸರಾಡದೆ ತೇಜಸ್ವಿನಿ ತೊಡೆಯಲ್ಲಿ ಕುಳಿತು ಕೊಂಡಿತು. ಅವಳ ಕೂದಲಿನಲ್ಲಿ ಆಟವಾಡತೊಡಗಿತು. "ಎಲ್ಲಿ ಇಳಿಯುವುದು ನೀವು?" ಆ ಮಹಿಳೆಯನ್ನು ವಿಚಾರಿಸಿದಳು. "ಕಾಲೇಜು ಸ್ಟಾಪಿನ ಹಿಂದಿನ ಸ್ಟಾಪ್". ಮತ್ತೇನು ಮಾತನಾಡಲು ತೋಚದೆ ಕಿಟಕಿಯತ್ತ ದೃಷ್ಟಿ ಹಾಯಿಸಿದಳು. ಕಾ ಲೇಜು ತಲುಪಲು ಇನ್ನು ಇಪ್ಪತ್ತು ನಿಮಿಷಗಳು  ಉಳಿದಿದೆ ಎನ್ನುವಷ್ಟರಲ್ಲಿ ಒಂದು ಸ್ಟಾಪ್ ಬಂದಿತು. ತೇಜಸ್ವಿನಿ ನೋಡುತ್ತಿರುವಂತೆ ಆ ಮಹಿಳೆ ಜನ ಜಂಗುಳಿಯ ಮಧ್ಯೆ ತೂರಿ ಮುಂಬಾಗಿಲಿನಿಂದ ಇಳಿದುಬಿಟ್ಟಳು. "ಓಯ್..ನಿಮ್ಮ ಮಗು"  ಹೇಳಲೆತ್ನಿಸಿದರೂ ಗಂಟಲಿನಿಂದ ಸ್ವರ ಬರುತ್ತಿಲ್ಲ. "ಅಯ್ಯೋ, ಇಳಿದು ಬಿಟ್ಟರಲ್ಲ ಏನು ಮಾಡಲಿ, ಬ್ಯಾಗ್ ಮರೆಯುವುದು ಕೇಳಿದ್ದೇನೆ. ಮಗುವನ್ನು ಮರೆತು ಹ...