ಪೋಸ್ಟ್‌ಗಳು

ಸೆಪ್ಟೆಂಬರ್, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಎಲ್ಲಿಗೀ ಪಯಣ

ಬಸ್ಸು ಶರವೇಗದಿಂದ ಬೆಂಗಳೂರಿಂದ ಮಂಗಳೂರಿಗೆ ಧಾವಿಸುತ್ತಿತ್ತು. ಸಹ ಪ್ರಯಾಣಿಕರು ಗಾಢ ನಿದ್ರೆಯಲ್ಲಿದ್ದರೂ  ಮಾತ್ರ ನಿದ್ದೆ ಹತ್ತಿರಲಿಲ್ಲ.ಜಯಂತ, ಬೆಂಗಳೂರಿನ ಕಂಪೆನಿಯೊಂದರಲ್ಲಿ ಕೆಲಸಕ್ಕಿದ್ದವನು ರಜೆಯ ನಿಂತ್ತ  ಹೊರಟಿದ್ದ. ಆದರೆ ಮನೆಯಲ್ಲಿ ಮಾತ್ರ ಈ ಸಲ ತನಗೆ ಬರಲಾಗದು ಎಂದು ತಿಳಿಸಿದ್ದ. ಮನೆಯವರಿಗೆ ಸರ್ಪ್ರೈಜ್ ಕೊಡುವುದು ಅವನ  ಪ್ಲಾನ್ ಆಗಿತ್ತು. ಅವನ ಮನದಲ್ಲಿ ಸಂತಸದ ಅಲೆಗಳು ಏಳುತ್ತಿತ್ತು. ಹಬ್ಬವಾದ್ದರಿಂದ ಮನೆಯವರಿಗೆಲ್ಲ ಬಟ್ಟೆಗಳನ್ನು ಕೊಂಡುಕೊಂಡಿದ್ದ. "ತಂಗಿ ಮುಂದೆ ಅವಳಿಷ್ಟದ ಅನಾರ್ಕಲಿ ಡ್ರೆಸ್  ಹಿಡಿದರೆ ಅವಳ ಮುಖ ಹೇಗೆ ಅರಳಬಹುದು, ಅಪ್ಪ,ಅಮ್ಮ ಎಷ್ಟು ಖುಷಿ ಪಡಬಹುದು, ಅಮ್ಮನ ಕೈಯ ನೀರುದೋಸೆ ತಿಂದು ಎಷ್ಟು ದಿನ ಆಯಿತು"  ಯೋಚಿಸುತ್ತಿದ್ದವನಿಗೆ ಸಣ್ಣಗೆ ನಿದ್ದೆ ಆವರಿಸಿತು. ದಢಾರ್ ಅಂತ ಅಂತ ಸದ್ದು. ಏನಾಯ್ತು ಎಂದು ತಿಳಿಯುವ ಮೊದಲೇ ಜಯಂತನಿಗೆ ಪ್ರಜ್ಞೆ ತಪ್ಪುತ್ತಿರುವ ಅನುಭವ. ಪ್ರಯಾಣಿಕರ ಅಳು ಚೀರಾಟ ಕೇಳುತ್ತಿತ್ತು.  ಮನೆಯವರಿಗೆ ಸಪ್ರೈಜ್ ಕೊಡಲು ಹೊರಟ  ಜಯಂತ ಮತ್ತೆಂದೂ ಬಾರದ  ಲೋಕಕ್ಕೆ  ಪಯಣಿಸಿದ್ದ.